ರಾಜ್ಯ ಸರ್ಕಾರದಲ್ಲಿ ಮೇಜರ್ ಸರ್ಜರಿ : ಹಿರಿಯ ಐಪಿಎಸ್–ಐಎಎಸ್ ಅಧಿಕಾರಿಗಳ ವರ್ಗಾವಣೆ – ಬಡ್ತಿ

ರಾಜ್ಯ ಸರ್ಕಾರವು ಆಡಳಿತ ಯಂತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಿಕೊಂಡಿದೆ. ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಡಿಜಿಪಿ ಬಡ್ತಿ ನೀಡಿ ಕಾರಾಗೃಹ ಇಲಾಖೆಗೆ ನೇಮಕ ಮಾಡಲಾಗಿದ್ದು, ಬಿ. ದಯಾನಂದ್ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದೆ. ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿನ ಸಿಎಟಿ ತೀರ್ಪಿನ ಬೆನ್ನಲ್ಲೇ ಈ ಬದಲಾವಣೆ ಜಾರಿಯಾಗಿದೆ. ಜೊತೆಗೆ ಏಳು ಮಂದಿ ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವ ಮೂಲಕ ಸರ್ಕಾರ ಹೊಸ ಆಡಳಿತ ವಿನ್ಯಾಸವನ್ನು ರೂಪಿಸಿದೆ.

Dec 12, 2025 - 01:10
Dec 12, 2025 - 01:14
 0
ರಾಜ್ಯ ಸರ್ಕಾರದಲ್ಲಿ ಮೇಜರ್ ಸರ್ಜರಿ :  ಹಿರಿಯ ಐಪಿಎಸ್–ಐಎಎಸ್  ಅಧಿಕಾರಿಗಳ ವರ್ಗಾವಣೆ – ಬಡ್ತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರು: ಪ್ರತಿ ಕೆಲವು ತಿಂಗಳಿಗೊಮ್ಮೆ ಆಡಳಿತ ಯಂತ್ರದಲ್ಲಿ “ಮೇಜರ್ ಸರ್ಜರಿ” ನಡೆಸುವ ರಾಜ್ಯ ಸರ್ಕಾರ, ಇದೀಗ ಹಿರಿಯ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ವರ್ಗಾವಣೆ–ಬಡ್ತಿ ಆದೇಶಗಳನ್ನು ಹೊರಡಿಸಿದೆ.

ಅಲೋಕ್ ಕುಮಾರ್, ಬಿ. ದಯಾನಂದ್ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳೂ ಈ ಬದಲಾವಣೆಯ ಪಟ್ಟಿಯಲ್ಲಿ ಸೇರಿದ್ದಾರೆ.

ಅಲೋಕ್ ಕುಮಾರ್‌ಗೆ ಡಿಜಿಪಿ ಬಡ್ತಿ – ಕಾರಾಗೃಹ ಇಲಾಖೆಗೆ ನೇಮಕ

ಪೊಲೀಸ್ ತರಬೇತಿ ಶಾಲೆಯ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನೇಮಕ ಮಾಡಲಾಗಿದೆ.

ತಮ್ಮನ್ನು ಕಡೆಗಣಿಸಿ ಇತರರಿಗೆ ಬಡ್ತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಲೋಕ್ ಕುಮಾರ್ ಸಿಎಟಿಗೆ ಮೊರೆ ಹೋಗಿದ್ದರು. ಇತ್ತೀಚೆಗೆ ಸಿಎಟಿ ಅವರ ಪರ ತೀರ್ಪು ನೀಡಿ, ತಡೆಹಿಡಿದಿದ್ದ ಬಡ್ತಿ–ಸೌಲಭ್ಯಗಳನ್ನು ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಫೋನ್ ಟ್ಯಾಪಿಂಗ್ ಪ್ರಕರಣ – ತನಿಖೆ ರದ್ದು

ಅಲೋಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಸಿಎಟಿ ರದ್ದುಪಡಿಸಿತ್ತು.

ಇಬ್ಬರು ಸದಸ್ಯರ ವಿಭಿನ್ನ ಅಭಿಪ್ರಾಯದ ಬಳಿಕ ವಿಷಯ ಮುಖ್ಯಸ್ಥ ನ್ಯಾಯಮೂರ್ತಿ ರಣ್‌ಜೀತ್ ಅವರ ಮುಂದೆ ವಿಚಾರಣೆಗೆ ಹೋಗಿ, ಅಕ್ಟೋಬರ್ 14ರಂದು ತನಿಖೆ ರದ್ದು ಮಾಡುವ ತೀರ್ಪು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಬಡ್ತಿ ನೀಡಿದಂತೆ ಕಾಣುತ್ತಿದೆ.

  • ಬಿ. ದಯಾನಂದ್ ವರ್ಗಾವಣೆ

ಕಾರಾಗೃಹ ಇಲಾಖೆಯ ಎಡಿಜಿಪಿಯಾಗಿದ್ದ ಬಿ. ದಯಾನಂದ್ ಅವರಿಗೆ ಇದೀಗ

ಪೊಲೀಸ್ ತರಬೇತಿ ಶಾಲೆಯ ಎಡಿಜಿಪಿ ಜವಾಬ್ದಾರಿ ನೀಡಲಾಗಿದೆ.

ಇದಕ್ಕೂ ಮುಂಚೆ ಅವರು ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದರು.

ಐಪಿಎಲ್ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆ ಹಿನ್ನೆಲೆ ಅವರಿಗೆ ತಾತ್ಕಾಲಿಕ ಅಮಾನತು ವಿಧಿಸಲಾಗಿತ್ತು.

ನಂತರ ಅಮಾನತು ರದ್ದು ಮಾಡಿ ಕಾರಾಗೃಹ ಇಲಾಖೆಗೆ ಕಳುಹಿಸಲಾಗಿತ್ತು.

  • ಮೂರು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ಹೊಸ ನೇಮಕಾತಿಗಳು

ಜ್ಯೋತಿ ಕೆ. – ಜವಳಿ ಅಭಿವೃದ್ಧಿ ಆಯುಕ್ತರಿಂದ

KPSC ಕಾರ್ಯದರ್ಶಿಯಾಗಿ ವರ್ಗಾವಣೆ.

ಈ ಹಿಂದೆ KPSC ಕಾರ್ಯದರ್ಶಿಯಾಗಿದ್ದ ಡಾ. ವಿಶಾಲ್ ಆರ್. ಅವರನ್ನು

ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿಸಿ ಬಿಡುಗಡೆ ಮಾಡಲಾಗಿದೆ.

ಅವರನ್ನು ಜೊತೆಗೆ

ಹಣಕಾಸು ಇಲಾಖೆಯ ಕಾರ್ಯದರ್ಶಿ (ಪ್ರಭಾರಿ) ಮತ್ತು

ಹಣಕಾಸು ನೀತಿ ಸಂಸ್ಥೆಯ ನಿರ್ದೇಶಕ (ಪ್ರಭಾರಿ) ಹುದ್ದೆಗಳನ್ನೂ ನೀಡಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಾ. ಮಂಜುಳಾ ಎನ್. ಅವರನ್ನೂ ಬಿಡುಗಡೆ ಮಾಡಲಾಗಿದೆ.

  • ಏಳು ಮಂದಿ ಐಎಎಸ್ ಅಧಿಕಾರಿಗಳಿಗೆ ಬಡ್ತಿ

1. ಕರೀಗೌಡ – ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ ಸಿಇಒ

2. ಡಾ. ಶಿವಶಂಕರ ಎನ್ – ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು

3. ಬಸವರಾಜೇಂದ್ರ ಎಚ್ – ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು

4. ಡಾ. ಎಚ್.ಎನ್. ಗೋಪಾಲ ಕೃಷ್ಣ – ಕಾರ್ಮಿಕ ಇಲಾಖೆಯ ಆಯುಕ್ತರು

5. ವಸಂತ್ ಕುಮಾರ್ ಪಿ – ಕೃಷಿ ಇಲಾಖೆ

6. ಶಿವಾನಂದ ಕಾಪಶಿ – ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರು

7. ಕವಿತಾ ಎಸ್. ಮನ್ನಿಕೇರಿ – ವಿಜಯನಗರ ಜಿಲ್ಲಾಧಿಕಾರಿ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.